ಋಷಿ ಮತ್ತು ನಾಣ್ಯ | Interesting Kannada short moral story

ಋಷಿ ಮತ್ತು ನಾಣ್ಯ | Interesting Kannada short moral story

 

ಋಷಿ ಮತ್ತು ನಾಣ್ಯ | Interesting Kannada short moral story
Kannada short moral story

ಒಬ್ಬ ಋಷಿಯು ಒಮ್ಮೆ ಒಂದು ರಾಜ್ಯಕ್ಕೆ ಆಗಮಿಸಿದರು. ಆ ರಾಜ್ಯದ ಒಂದು ಗ್ರಾಮದ ಮೂಲಕ ಹಾದು ಹೋಗುತ್ತಿದ್ದಾಗ ರಸ್ತೆಯಲ್ಲಿ ಬಿದ್ದಿದ್ದ ಒಂದು ಬೆಲೆಬಾಳುವ ನಾಣ್ಯವನ್ನು ಗಮನಿಸಿದರು. ಋಷಿಯು ಅದನ್ನು ಎತ್ತಿಕೊಂಡು, ಅವರು ತನ್ನ ಸರಳ ಜೀವನದಿಂದ ತೃಪ್ತನಾಗಿದ್ದರಿಂದ ಮತ್ತು ಅದರ ಅಗತ್ಯವಿಲ್ಲದಿದ್ದರಿಂದ ಅದನ್ನು ದಾನ ಮಾಡಲು ನಿರ್ಧರಿಸಿದರು.

ಋಷಿಯು ನಾಣ್ಯವನ್ನು ದಾನ ನೀಡುವ ಉದ್ದೇಶದಿಂದ ದಿನವಿಡೀ ಆ ಗ್ರಾಮದ ಬೀದಿಗಳಲ್ಲಿ ಸುತ್ತಾಡಿದರು. ಆದರೆ ಅಂತಹ ಯಾರನ್ನೂ ಕಂಡುಹಿಡಿಯಲು ಆಗಲಿಲ್ಲ. ಕತ್ತಲಾದ ಕಾರಣ ಋಷಿಯು ವಿಶ್ರಾಂತಿ ಪಡೆಯುವ ಉದ್ದೇಶದಿಂದ ಗ್ರಾಮದ ಹೊರವಲಯದಲ್ಲಿದ್ದ ಒಂದು ಮಂದಿರವನ್ನು ತಲುಪಿ ಆ ರಾತ್ರಿಯನ್ನು ಅಲ್ಲಿಯೇ ಕಳೆದರು. ಮರುದಿನ ಬೆಳಿಗ್ಗೆ, ಋಷಿಯು ಒಬ್ಬ ರಾಜನು ತನ್ನ ಸೈನ್ಯದೊಂದಿಗೆ ಮತ್ತೊಂದು ರಾಜ್ಯದ ಆಕ್ರಮಣಕ್ಕೆ ಹೋಗುತ್ತಿರುವುದನ್ನು ಕಾಣುತ್ತಾರೆ. ಋಷಿಯನ್ನು ಕಂಡ ರಾಜನು, ಋಷಿಯ ಬಳಿ ಆಶೀರ್ವಾದ ಪಡೆಯುವ ಆಲೋಚನೆಯಿಂದ ತನ್ನ ಸೈನ್ಯವನ್ನು ನಿಲ್ಲಿಸುತ್ತಾನೆ.

ಋಷಿಯ ಬಳಿ ಬಂದು ಆಶೀರ್ವಾದ ಬೇಡಿದ ರಾಜನಿಗೆ ಋಷಿಯು ತನ್ನ ಬಳಿ ಇದ್ದ ಒಂದು ನಾಣ್ಯವನ್ನು ನೀಡುತ್ತಾರೆ. ಋಷಿ ನೀಡಿದ ನಾಣ್ಯದಿಂದ ರಾಜ ಗೊಂದಲಕ್ಕೊಳಗಾದನು. ರಾಜನು ಇದರ ಅರ್ಥ ತಿಳಿಯುವ ಉದ್ದೇಶದಿಂದ ಆ ಋಷಿಗೆ ಈ ಒಂದು ನಾಣ್ಯದ ಅರ್ಥವೇನೆಂದು ಕೇಳುತ್ತಾನೆ.

ಆಗ ಋಷಿ, ಮಹಾರಾಜರಿಗೆ ತನಗೆ ನಾಣ್ಯ ಸಿಕ್ಕಿದ್ದು ಮತ್ತು ಅದನ್ನು ಅಗತ್ಯವಿರುವವರಿಗೆ ದಾನ ಮಾಡಲು ಪಟ್ಟ ಕಷ್ಟ ಎಲ್ಲವನ್ನು ವಿವರಿಸಿದರು. ನಿಮ್ಮ ರಾಜ್ಯದಲ್ಲಿ ಎಲ್ಲರೂ ಸಂತೋಷದಿಂದ ಇದ್ದಾರೆ ಮತ್ತು ಇದ್ದದ್ದರಲ್ಲಿಯೇ ಅವರು ತೃಪ್ತರಾಗಿದ್ದಾರೆ. ಹಾಗಾಗಿ ಈ ನಾಣ್ಯವನ್ನು ಕೊಡಲು ನನಗೆ ಯಾರೂ ಸಿಗಲಿಲ್ಲ ಎಂದು ಋಷಿ ಹೇಳಿದರು.

ಋಷಿ ತಮ್ಮ ಮಾತನ್ನು ಮುಂದುವರಿಸಿ ಆದರೆ ಈ ರಾಜ್ಯದ ರಾಜರಾದ ನೀವು ಈಗಿರುವುದರಲ್ಲಿ ತೃಪ್ತಿ ಹೊಂದಿಲ್ಲ. ಇನ್ನೂ ಹೆಚ್ಚಿನದನ್ನು ಗಳಿಸುವ ಬಯಕೆಯನ್ನು ಹೊಂದಿದ್ದೀರಿ. ಆದ್ದರಿಂದ ಈ ನಾಣ್ಯದ ಅವಶ್ಯಕತೆ ನಿಮಗೆ ಇರಬಹುದೆಂದು ಭಾವಿಸಿ ನಿಮಗೆ ಈ ನಾಣ್ಯ ನೀಡಿದೆ ಎಂದು ಋಷಿ ಹೇಳಿದರು.

ರಾಜನಿಗೆ ತನ್ನ ತಪ್ಪಿನ ಅರಿವಾಗಿ ಯುದ್ಧದ ಆಲೋಚನೆಯನ್ನು ಅಲ್ಲಿಯೇ ಕೈ ಬಿಟ್ಟು ತನ್ನ ಸೈನ್ಯದೊಂದಿಗೆ ಮರಳಿದನು.

ಕಥೆಯ ನೀತಿ: ನಾವು ಯಾವಾಗಲೂ ಇದ್ದುದರಲ್ಲಿಯೇ ತೃಪ್ತಿ ಪಡಬೇಕು.

 

ಕಳೆದುಹೋದ ಸಂತೋಷ | Kannada Short Story

 

ಋಷಿ ಮತ್ತು ನಾಣ್ಯ, Rishi and Coin, Kannada short story, Kannada short moral story, ಕನ್ನಡ ನೀತಿ ಕಥೆಗಳು, ಕನ್ನಡ ಸಣ್ಣ ಕಥೆಗಳು, moral story in Kannada, Kannada moral story, interesting story, short moral story, life lessons, Kannada tale, story for kids, story with a lesson, value of honesty, traditional Kannada stories, Indian moral stories, wisdom in stories.

 

Join Our WhatsApp Group

FAQ:

Q1: What is the story “ಋಷಿ ಮತ್ತು ನಾಣ್ಯ” about?
A1: The story is about a sage and a coin, highlighting the importance of honesty and moral values in life.

Q2: Is “ಋಷಿ ಮತ್ತು ನಾಣ್ಯ” a suitable story for children?
A2: Yes, it’s a simple and engaging story with a moral lesson, making it ideal for children.

Q3: What lesson does “ಋಷಿ ಮತ್ತು ನಾಣ್ಯ” teach?
A3: The story teaches the value of honesty and the rewards of doing the right thing.

Q4: Where can I read the story “ಋಷಿ ಮತ್ತು ನಾಣ್ಯ”?
A4: You can read this Kannada short moral story on various online platforms and in Kannada storybooks.

Q5: Can I use this story in my classroom?
A5: Yes, it is perfect for teaching kids about ethical values and good behavior.

Leave a Comment

Your email address will not be published. Required fields are marked *

Scroll to Top